Shubhashaya News

ಸಂವಿಧಾನದ ಶಿಲ್ಪಿ ಅಂಬೇಡ್ಕರ್ ಅತ್ಯಂತ ಶ್ರೇಷ್ಠ ನಾಯಕ: ಕರದಾಳ

ಚಿತ್ತಾಪುರ ಪಟ್ಟಣದ ಭೀಮನಗರ ಬಾಹರಪೇಠದಲ್ಲಿ ಅಂಬೇಡ್ಕರ್‍ರವರ 130 ಜನ್ಮದಿನೋತ್ಸವದ ಅಂಗವಾಗಿ ಸಂವಿಧಾನ ರಕ್ಷಣೆಗಾಗಿ ಸರ್ವಜನ ಸಂಕಲ್ಪ ಕುರಿತು ವಿಚಾರ ಸಂಕೀರ್ಣವನ್ನು ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಉದ್ಘಾಟಿಸಿದರು.
ಚಿತ್ತಾಪುರ: ಶತ ಶತಮಾನಗಳಿಂದ ಜಾತಿ ಜಾತಿ ನಡುವೆ ನಡೆಯುತ್ತಿದ್ದ ಶೋಷಣೆ, ಅಸಮಾನತೆಯನ್ನು ಹೋಗಲಾಡಿಸಲು ವಿಶ್ವದಲ್ಲಿಯೇ ಅತೀ ಶ್ರೇಷ್ಟ್ರ ಸಂವಿಧಾನದ ಮೂಲಕ ಜಾರಿಗೆ ತಂದ ಮಹಾನ್ ನಾಯಕ ಡಾ. ಬಾಬಾಸಾಹೇಬ ಅಂಬೇಡ್ಕರ ಮುಂಚುಣಿ ನಾಯಕರಾಗಿದ್ದಾರೆ ಎಂದು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ ಹೇಳಿದರು.
ಪಟ್ಟಣದ ಭೀಮನಗರ ಬಾಹರಪೇಠದಲ್ಲಿ ದಲಿತ ಸಂಘರ್ಷ ಸಮಿತಿ ಮತ್ತು ಅಂಬೇಡ್ಕರ್ ತರುಣ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಬಾಬಾಸಾಹೇಬ ಅಂಬೇಡ್ಕರ್‍ರವರು 130ನೇ ಜನ್ಮದಿನೊತ್ಸವದ ಅಂಗವಾಗಿ ಸಂವಿಧಾನ ರಕ್ಷಣೆಗಾಗಿ ಸರ್ವಜನ ಸಂಕಲ್ಪ ಕುರಿತ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಾಬಾಸಾಹೇಬರು ದಲಿತರು, ಹಿಂದುಳಿದವರು, ಮಹಿಳೇಯರಿಗೆ ಸ್ವಾತ್ರಂತ್ರ ಸಮಾನತೆ ನೀಡುವ ಮೂಲಕ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಆದರೆ ಅವರಿಗೆ ಒಂದೇ ಜಾತಿ ಜನಾಂಗಕ್ಕೆ ಸೀಮಿತ ಮಾಡುವ ಕೆಲಸ ನಡೆಯುತ್ತಿರುವುದು ದುರದುಷ್ಟಕರವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಸಾನಿಧ್ಯ ವಹಿಸಿ ಮಾತನಾಡಿದ ಅವರು, ಮಹಾನ್ ನಾಯಕರ ಜಯಂತಿಗಳನ್ನು ಜಯಂತಿಗಳಿಗೆ ಮಾತ್ರ ಸೀಮಿತಗೊಳಿಸದೇ ಅವರು ಸಮಾಜ ಸುಧಾರಣೆಗಾಗಿ ನೀಡಿರುವ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಸ್ಪಲ್ಪ ಮಟ್ಟಿಗಾದರೂ ಅಳವಡಿಸಿಕೊಂಡಲ್ಲಿ ಅವರು ಮಾಡಿರುವ ಸಮಾನತೆಗೆ ಒಂದು ನ್ಯಾಯ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ, ದಸಂಸ ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರೆ, ಉದಯಕುಮಾರ ಸಾಗರ, ನರಸಪ್ಪ ಚಿನ್ನಾಕಟ್ಟಿ ಮಾತನಾಡಿದರು. ಪುರಸಭೆ ಸದಸ್ಯರಾದ ಪ್ರಭು ಗಂಗಾಣಿ, ರಮೇಶ ಬೊಮ್ಮನಳ್ಳಿ, ಹಿರಿಯ ಮುಖಂಡರಾದ ಬಸಣ್ಣ ತಳವಾರ, ಸಾಬಣ್ಣ ಆರಬೋಳ, ರಾಯಪ್ಪ ಚಂದ್ರಕಲ್, ಸಾಬಣ್ಣ ಬುರ್ಲಿ, ನಾಗಪ್ಪ ಕಲ್ಲಕ್ ವೇದಿಕೆಯಲ್ಲಿದ್ದರು.
ಮುಖಂಡರಾದ ಚಂದ್ರಶೇಖರ ನಾಟೀಕಾರ, ಜಗನಾಥ ಮುಡಬೂಳಕರ್, ಸೂರಜ್ ಕಲ್ಲಕ್, ನಾಗೇಂದ್ರ ಬುರ್ಲಿ, ಶಿವು ಆರಬೋಳ, ಹುಸನಪ್ಪ ಚಂದ್ರಕಲ್, ಶಿವರಾಯ ಕಲ್ಲಕ್, ಗಂಗಮ್ಮ ಕಲ್ಲಕ್, ವಿಜಯಕುಮಾರ ಬುರ್ಲಿ, ಕಾಶಪ್ಪ ಕಲ್ಲಕ್, ಶಂಬುಲಿಂಗ ಬುರ್ಲಿ, ಯಲ್ಲಮ್ಮ ಆರಬೊಳ, ಮಲ್ಲಪ್ಪ ನಾಟೀಕಾರ, ಲಕ್ಷ್ಮೀಕಾಂತ ಬುರ್ಲಿ, ಶರಣಪ್ಪ ಹೆಡಗಿಮದ್ರಿ, ಶಾಮರಾಯ ಕಲ್ಲಕ್, ರಾಣಪ್ಪ ತಂಗನ್, ಮೋನಪ್ಪ ನಾಟೀಕಾರ, ಶಿವು ನಾಟೀಕಾರ, ಮಲ್ಲಪ್ಪ ಕದ್ದರಗಿ, ಸಂಗಪ್ಪ ಬಡೀಗೇರ ಸೇರಿದಂತೆ ಇತರರು ಇದ್ದರು. ಡಿಎಸ್‍ಎಸ್ ತಾಲೂಕು ಸಂಚಾಲಕ ಆನಂದ ಕಲ್ಲಕ್ ನಿರೂಪಿಸಿದರು.

Comments are closed.

Don`t copy text!