Shubhashaya News

ರಜೆ ಮೊಟುಕುಗೊಳಿಸಿ ಗಡಿಯಲ್ಲಿ ಕರ್ತವ್ಯಕ್ಕೆ ಯೋಧರ ರವಾನೆ 

ಆಳಂದ: ಧುತ್ತರಗಾಂವ ನಿವಾಸಿ ಯೋಧ ಹಣಮಂತರಾಯ ಚೌಸೆ ಅವರ ಪತ್ನಿ ಸ್ನೇಹಾಳು ಗಂಡು ಮಗುವಿಗೆ ಜನ್ಮವಿತ್ತಿದ್ದು, ಪತ್ನಿಯನ್ನು ದೈರ್ಯತುಂಬಿ ಗಡಿಯಲ್ಲಿ ಕರ್ತವ್ಯಕ್ಕೆ ತೆರಳಿದರು.

ಆಳಂದ: ಯೋಧ ಯಳಸಂಗಿ ಗ್ರಾಮದ ಸಂಜಯ ಅಕ್ಕಲಕೋಟ  ಅವರಿಗೆ ಪುತ್ರಿ ಹಾಗೂ ಪತ್ನಿ ಆರತಿ ಬೆಳಗಿ ಕರ್ತವ್ಯಕ್ಕೆ ಬೋಳ್ಕೊಟ್ಟರು.

ಆಳಂದ: ಯೋಧ ಸಂಜಯ ಅಕ್ಕಲಕೋಟ ಅವರಿಗೆ ಗಡಿಯಲ್ಲಿ ಕರ್ತವ್ಯಕ್ಕೆ ಕರೆ ಬಂದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಿವೃತ್ತ ಸೈನಿಕ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ಧಲಿಂಗ ಮಲಶೆಟ್ಟಿ ಮತ್ತವರ ಪದಾಧಿಕಾರಿಗಳು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.

 

 

ಆಳಂದ: ರಜೆ ಮೇಲೆ ಊರಿಗೆ ಬಂದಿಳಿದಿದ್ದ ಸುಮಾರು 8 ಜನ ಯೋಧರು ಪಾಕಿಸ್ತಾನದ ಅಟ್ಟಹಾಸ್ಯ ಮುಂದುವರೆಸಿದ ಹಿನ್ನೆಲೆಯಲ್ಲಿ ತಮ್ಮ ರಜಾವಧಿ ಮೊಟುಕುಗೊಳಿಸಿ ಕುಟುಂಬವನ್ನು ಬಿಟ್ಟು ದೇಶ ಸೇವೆಗೆ ಹಿಂದಿರುಗಿದ್ದಾರೆ.

ಬಿಎಸ್‍ಎಫ್ ಯೋಧ ತಾಲೂಕಿನ ಯಳಸಂಗಿ ಗ್ರಾಮದ ನಿವಾಸಿ ಸಂಜಯ ಅಕ್ಕಲಕೋಟ ಅವರಿಗೆ ರಾಜ್ಯಸ್ಥಾನದ ಜೆಸೆಲ್‍ಮೇರ್ 122 ಬಿಎಸ್‍ಫ್ ಬಟಾಲಿಯನ್ ರೀಕಾಲ್ ಬಂದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಸಿದ್ಧಲಿಂಗ ಮಲಶೆಟ್ಟಿ ನೇತೃತ್ವದಲ್ಲಿ ಪದಾಧಿಕಾರಿಗಳು ಗೌರವಿಸಿ ಶುಭಕೋರಿ ಕರ್ತವ್ಯಕ್ಕೆ ಹಾಜರಾಗಲು ಬೀಳ್ಕೊಡುಗೆ ನೀಡಿದರು. ಇದಕ್ಕೂ ಮೊದಲು ಕುಟುಂಬದಿಂದ ಪುತ್ರಿ ಹಾಗೂ ಪತ್ನಿ ಆರತಿ ಬೆಳಗಿ ಶುಭಕೋರಿದ್ದಾರೆ.

ಯಳಸಂಗಿ ಗ್ರಾಮದಿಂದ ಸಂಜಯ ಅಕ್ಕಲಕೋಟೆ, ಬಂಗರಗಾದ ಶ್ರೀಶೈಲ ಜಮಾದಾರ, ಮಾದನಹಿಪ್ಪರಗಾದಿಂದ ರಾಮಚಂದ್ರ ಬಾನುದಾಸ್ ಫುಲಾರೆ, ಮಲ್ಲಿಕಾರ್ಜುನ ತೂಳನೂರೆ, ತಂಬಾಕವಾಡಿ ಗ್ರಾಮದಿಂದ ರಾಜಶೇಖರ ವಳವಂಡವಾಡಿ, ಕಡಗಂಚಿಯಿಂದ ವಿಶ್ವನಾಥ ಚಿಂಚನೂರ, ಸಾವಳೇಶ್ವರನಿಂದ ಮಲ್ಲಿಕಾರ್ಜುನ ಘೋಡಕೆ, ಮತ್ತು ಧನರಾಜ ಮೂಲಗೆ ಅವರು ಕುಟುಂಬಕ್ಕಿಂತ ದೇಶ ಮುಖ್ಯವೆಂದು ರಜೆ ಅರ್ಧಕ್ಕೆ ಮೊಟಕುಗೊಳಿಸಿ ಕುಟುಂಬಕ್ಕಿಂತ ದೇಶ ಸೇವೆಯ ಧೇಯೆಯವಾಗಿದೆ ಎಂದು ಗಡಿ ಭದ್ರತೆಗೆ ತೆರಳಿದ್ದಾರೆ.

Comments are closed.

Don`t copy text!