ಖಜೂರಿ ಪರೀಕ್ಷಾ ಕೇಂದ್ರದಲ್ಲಿ ನಕಲಿಗೆ ಸಹಕಾರ: ನೋಟಿಸ್
ಮಾದರಿ ಪರೀಕ್ಷಾ ವ್ಯವಸ್ಥೆ ನಿರ್ವಹಿಸಲು ಪರದಾಡಿದ ಸಿಬ್ಬಂದಿ ನಿಟ್ಟುಸಿರು
ಆಳಂದ: ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ಹಿಂದಿ ಪರೀಕ್ಷೆ ಉತ್ತರ ಪತ್ರಿಕೆಗಳನ್ನು ಕ್ರೂಢೀಕರಿಸಿ ಶಿಕ್ಷಣ ಇಲಾಖೆಯ ಸಮ್ಮುಖದಲ್ಲಿ ಅಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ರವಾನಿಸಿದರು.
ಆಳಂದ: ಕಳೆದೆರಡು ವರ್ಷಗಳಿಂದ ವೇಬ್ಕಾಸ್ಟಿಂಗ್ ಮೂಲಕ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯು ಈ ಬಾರಿಯೂ ನಡೆದಿದ್ದು, ಆದರೆ ವಿಶೇಷವಾಗಿ ಸಣ್ಣ-ಪುಟ್ಟ ಲೂಪದೋಷಗಳು ಬೆgಳೆಣಿಕೆಯಷ್ಟೇ ಕಡೆ ನಕಲಿಗೆ ಸಹರಿಸಿದ್ದಾರೆ ಎಂಬ ಆರೋಪ ಬಿಟ್ಟರೆ ಇನ್ನೂಳಿದೆಯಲ್ಲ ಕಡೆ ಪರೀಕ್ಷೆ ಮಾದರಿಯಾಗಿ ಇತಿಹಾಸ ಬರೆಯುವುದರ ಜೊತೆಗೆ ಪರೀಕ್ಷಾ ಸಿಬ್ಬಂದಿಗಳ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಂತೆ ನೌಕರಿ ಉಳಿದರೆ ಸಾಕಪ್ಪ ಎಂಬ ಭೀತಿಯಲ್ಲಿ ಕರ್ತವ್ಯ ನಿರ್ವಹಿಸಿರುವ ಸಿಬ್ಬಂದಿಗಳಿಗೆ ಕೊನೆಯ ದಿನದ ಹಿಂದಿ ಪರೀಕ್ಷೆಯಾದ ಬಳಿಕ ಬಚಾವಾದೇವು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಯ ವೇಳೆ ತಾಲೂಕಿನ ಖಜೂರಿ ಪರೀಕ್ಷಾ ಕೇಂದ್ರದಲ್ಲಿ ನಕಲಿಗೆ ಸಹಕರಿಸಲಾಗಿದೆ ಎಂಬ ಆರೋಪ ಮಾಡಿ ಶಿಕ್ಷಣ ಇಲಾಖೆಯೂ ಬಿರಿಸನ ತನಿಖೆಗೆ ಜಾಲಬೀಸಿದೆ. ಈ ಕುರಿತು ಕೇಂದ್ರದಲ್ಲಿನ ಸಿಸಿ ಕ್ಯಾಮಿರಾ ದೃಶಾವಳಿಯನ್ನು ನೀಡುವಂತೆ ಪರೀಕ್ಷಾ ಕೇಂದದ ಮುಖ್ಯಸ್ಥರಿಗೆ ವಿಡಿಯೋ ಸಾಕ್ಷಿ ಸಮೇತ ಸ್ಪಷ್ಟನೆ ಕೇಳಿರುವ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ನೋಟಿಸ್ ಜಾರಿಗೊಳಿಸಿದ್ದಾರೆ.
ವೆಬ್ಕಾಸ್ಟಿಂಗ್ ಬದಲಾಯಿಸಿದ ವ್ಯವಸ್ಥೆ: ಈ ಹಿಂದೆ ಪರೀಕ್ಷೆಗಳಲ್ಲಿ ನಮ್ಮ ಮಕ್ಕಳಿಗೆ ಎಂಸಿಕ್ಯೀಸ್ಗಳು ಹೇಳಿಕೊಡುತ್ತಾರೆ ಎಂದು ಶಿಕ್ಷಕರಿಗೆ ಎಲ್ಲಿಲ್ಲದ ಮರೆಯಾದೆ. ಈಗ ವೆಬ್ಕಾಸ್ಟಿಂಗ್ ವ್ಯವಸ್ಥೆಯಿಂದಾಗಿ ಎಲ್ಲವೂ ತಿರುಮುರುವಾಗಿ ಶಿಕ್ಷಕರು ತಮ್ಮ ನೌಕರಿ ಉಳಿದರೆ ಸಾಕಪ್ಪ ಎಂಬ ಲೆಕ್ಕದಲ್ಲಿ ಉತ್ತರ ಹೇಳಿಕೊಡಲು ಮುಂದಾಗಿಲ್ಲ. ಇದೇ ಮಾದರಿಯಲ್ಲಿ ಪರೀಕ್ಷೆಗಳು ನಡೆದರೆ ಮಾತ್ರ ಉತ್ತಮ ಶಿಕ್ಷಕರಿಗೆ ಬೆಲೆ ಹಾಗೂ ಕಠಿಣ ಪರಿಶ್ರಮ ಪಡುವ ವಿದ್ಯಾರ್ಥಿಗಳಿಗೆ ನ್ಯಾಯ ದೊರೆಯುತ್ತದೆ ಎಂದು ಶಿಕ್ಷಕ ಸಮುದಾವೇ ಹೇಳಿಕೊಳುತ್ತಿದೆ.
ಹಿಂದಿ ಕೊನೆಯ ಪತ್ರಿಕೆ ಮುಗಿತು:
ಏ.4ರಂದು ತಾಲೂಕಿನ ಎಸ್ಎಸ್ಎಲ್ಸಿ ಮೂರನೇ ಭಾμÉ ಹಿಂದಿ ಪರೀಕ್ಷೆ 16 ಪರೀಕ್ಷಾ ಕೇಂದ್ರಗಲ್ಲಿ ಉತ್ತಮವಾಗಿ ನಡೆದ ಪ್ರಾಥಮಿಕ ವರದಿಯಾಗಿದೆ. ಒಟ್ಟುಪರೀಕ್ಷೆಗೆ ನೋಂದಾಯಿಸಿದ್ದ 5,462 ವಿದ್ಯಾರ್ಥಿಗಳಲ್ಲಿ 5,054 ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಇನ್ನೂಳಿದ 408 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಕಿತ್ತೂರಾಣಿ ಚನ್ನಪ್ಪ ಕೇಂದ್ರ 262 ವಿದ್ಯಾರ್ಥಿಗಳಲ್ಲಿ 250 ಹಾಜರಾದರೆ (12),ಗೈರು,
ಕರ್ನಾಟಕ ಪಬ್ಲಿಕ್ ಸ್ಕೂಲ್ (ಮದÀನಹಿಪ್ಪರಗಾ) 412 ವಿದ್ಯಾರ್ಥಿಗಳಲ್ಲಿ 354 ಹಾಜರಾಗಿ, (58 ಗೈರು), ಸರ್ಕಾರಿ ಹೈಸ್ಕೂಲ್ ಸರಸಂಬಾ 478 ವಿದ್ಯಾರ್ಥಿಗಳಲ್ಲಿ 455 ಹಾಜರಾಗಿ, (23 ಗೈರು). ವಿ.ಕೆ.ಸಲಗರ ಹೈಸ್ಕೂಲ್ 316 ವಿದ್ಯಾರ್ಥಿಗಳಲ್ಲಿ 306 ಹಾಜರಾಗಿ, (10 ಗೈರು), ಆಳಂದ ಮಹಾತ್ಮಾ ಗಾಂಧಿ ಶಾಲೆ (ಅಹಮದ್ ನಗರ) 313 ವಿದ್ಯಾರ್ಥಿಗಳಲಿ 297 ಹಾಜರಾಗಿ, (16 ಗೈರು), ಸರ್ಕಾರಿ ಪಿಯು ಕಾಲೇಜು ಖಜೂರಿ ಕೇಂದ್ರ 291 ವಿದ್ಯಾರ್ಥಿಗಳಲ್ಲಿ 271 ಹಾಜರಾಗಿ, (18ಗೈರು), ಕಿತ್ತೂರುರಾಣಿ ಚನ್ನಮ್ಮ ಶಾಲೆ ಕೇಂದ್ರ 262 ವಿದ್ಯಾರ್ಥಿಗಳಲ್ಲಿ 250ವಿದ್ಯಾರ್ಥಿಗಳು ಹಾಜರಾಗಿ (12ಗೈರು), ಯಳಸಂಗಿ ಸರ್ಕಾರಿ ಪಿಯು ಕಾಲೇಜು ಕೇಂದ್ರದಲ್ಲಿ 348 ವಿದ್ಯಾರ್ಥಿಗಲ್ಲಿ 310 ಹಾಜರಾಗಿದ್ದು, (38ಗೈರು), ಆರ್ಎಂಎಸ್ ಶಾಲೆ 347 ವಿದ್ಯಾರ್ಥಿಗಳಲ್ಲಿ 329 ವಿದ್ಯಾರ್ಥಿಗಳು ಹಾಜರಾಗಿ (18ಗೈರು), ಆಲ್ಫಾರುಕ ಶಾಲೆ ಆಳಂದ 247 ವಿದ್ಯಾರ್ಥಿಗಳಲ್ಲಿ 232 ಹಾಜರಾಗಿದ್ದು, (15 ಗೈರು), ಆಳಂದ ಸರ್ಕಾರಿ ಬಾಲಕರ ಪಿಯು ಕೇಂದ್ರ 412 ವಿದ್ಯಾರ್ಥಿಗಳಲ್ಲಿ 399 ಹಾಜರಾಗಿ (13ಗೈರು), ಸರ್ಕಾರಿ ಹೈಸ್ಕೂಲ್ (ಕಮಲಾನಗರ) 213 ವಿದ್ಯಾರ್ಥಿಗಳಲ್ಲಿ 201 ಹಾಜರಾಗಿ, (12ಗೈರು), ಮೊರಾರ್ಜಿ ದೇಸಾಯಿ ಶಾಲೆ (ತಡಕಲ್) 378 ವಿದ್ಯಾರ್ಥಿಗಳಲ್ಲಿ 336 ಹಾಜರಾಗಿ, (42 ಗೈರು), ಬಸವೇಶ್ವರ ಹೈಸ್ಕೂಲ್ (ಆಳಂದ್) 270 ವಿದ್ಯಾರ್ಥಿಗಳಲ್ಲಿ 257 ಹಾಜರಾಗಿ, (13 ಗೈರು), ಸರ್ಕಾರಿ ಪಿಯು ಕಾಲೇಜು (ನಾರೋಣ) 379 ವಿದ್ಯಾರ್ಥಿಗಳಲಿ 304 ಹಾಜರಾಗಿ, (75 ಗೈರು), ಮೌಂಟ್ ಕಾರ್ಮೆಲ್ ಪ್ರೈಮರಿ ಶಾಲೆ (ಕಡಗಂಚಿ) 438 ವಿದ್ಯಾರ್ಥಿಗಳಲ್ಲಿ 409 ಹಾಜರಾಗಿ, (29ಗೈರು), ಸರ್ಕಾರಿ ಜೂನಿಯರ್ ಕಾಲೇಜು (ನಿಂಬರ್ಗಾ) 358 ವಿದ್ಯಾರ್ಥಿಗಳಲ್ಲಿ 342 ಹಾಜರಾಗಿ, (16ಗೈರು), ಹೀಗೆ ಒಟ್ಟಾರೆ ಹಾಜರಾತಿ ಶೇ. 92.54 ಆಗಿದ್ದು, ಪರೀಕ್ಷೆ ಶಿಸ್ತಿನಿಂದ ನಡೆಸಲಾಯಿತು. ಯಾವುದೇ ಅಕ್ರಮ ವರದಿಯಾಗಿಲ್ಲ.
ವೀಡಿಯೋ ದೃಶ್ಯಾವಳಿ ಸಂಬಂಧ ವಿವಾದ: ನೋಟಿಸ್
ಶಾಲಾ ಶಿಕ್ಷಣ ಇಲಾಖೆಯಿಂದ ತನಿಖೆ ಆರಂಭ. ಏಪ್ರಿಲ್ 04, 2025: 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-01ರ ಗಣಿತ ಪರೀಕ್ಷೆಯು ಈ ವೇಳೆ ತಾಲೂಕಿನ ಖಜೂರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ) ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಪರೋಕ್ಷವಾಗಿ ನಕಲು ಮಾಡಲು ಸಹಕಾರ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸ್ಪಸ್ಟತೆ ನೀಡುವಂತೆ ಕಾರಣ ಕೇಳಿ ಮೇಲಾಧಿಕಾರಿಗಲು ನೋಟಿಸ್ ನೀಡಿದ್ದಾರೆ.
ಜಿಲ್ಲಾ ವೆಬ್ ಕಾಸ್ಟಿಂಗ್ ತಂಡದ ವೀಕ್ಷಣೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದ್ದು, ಕ್ಯಾಮರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಆಧರಿಸಿ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ಹಾಗೂ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಈ ಬಗ್ಗೆ ಗಮನಿಸಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ನಿರ್ದೇಶಕರ ಆದೇಶದಂತೆ, ಸಂಬಂಧಪಟ್ಟ ಪರೀಕ್ಷಾ ಕೇಂದ್ರದ ಸಂಪೂರ್ಣ ವೀಡಿಯೋ ದೃಶ್ಯಾವಳಿಗಳನ್ನು ಹಾರ್ಡ್ ಡಿಸ್ಕ್ನಲ್ಲಿ ಸಲ್ಲಿಸುವಂತೆ ಉಪನಿರ್ದೇಶಕರು ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಆದೇಶಿಸಿದ್ದಾರೆ.
ಈ ಘಟನೆಯು ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಸಮಗ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ತನಿಖೆಯ ಫಲಿತಾಂಶದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಮೂಲಗಳು ತಿಳಿಸಿವೆ.
ಪರೀಕ್ಷಾ ಕೇಂದ್ರಗಳಲ್ಲಿ ಆಸನ ವ್ಯವಸ್ಥೆ ಸಮಸ್ಯೆ: ನೋಟಿಸ್
ಏಪ್ರಿಲ್ 04, 2025: 2024-25ನೇ ಸಾಲಿನ ಮಾರ್ಚ್/ಏಪ್ರಿಲ್ ಎಸ್.ಎಸ್.ಎಲ್.ಸಿ ಪರೀಕ್ಷೆ-1ರ ಸಂದರ್ಭದಲ್ಲಿ ಅಳಂದ ತಾಲೂಕಿನ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಆಸನ ವ್ಯವಸ್ಥೆ ಸರಿಯಾಗಿ ನಿರ್ವಹಿಸದಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ.
ಮಾರ್ಚ್ 26, 2025ರಂದು ಜಿಲ್ಲಾ ವೆಬ್ ಕಾಸ್ಟಿಂಗ್ ತಂಡದ ವೀಕ್ಷಣೆಯಲ್ಲಿ, ಮಹಾತ್ಮ ಗಾಂಧಿ ಪ್ರೌಢ ಶಾಲೆ ಆಳಂದ, ಸರ್ಕಾರಿ ಪ್ರೌಢ ಶಾಲೆ ಖಜೂರಿ, ಆದರ್ಶ ವಿದ್ಯಾಲಯ ಆಳಂದ ಸೇರಿದಂತೆ ಹಲವು ಕೇಂದ್ರಗಳಲ್ಲಿ ಚಿಕ್ಕ ಬೆಂಚುಗಳಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸಲಾಗಿದ್ದು, ಇದರಿಂದ ಪರೀಕ್ಷೆ ಬರೆಯಲು ತೊಂದರೆಯಾಗುತ್ತಿದೆ ಎಂದು ಗಮನಕ್ಕೆ ಬಂದಿದೆ. ಈ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳಿಗೆ ಅನಾನುಕೂಲತೆ ಉಂಟಾಗುವುದಲ್ಲದೇ, ನಕಲು ಮಾಡಲು ಪ್ರಚೋದನೆ ಸಿಗುತ್ತಿದೆ ಎಂದು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉಪನಿರ್ದೇಶಕರ ಕಚೇರಿಯಿಂದ ಈ ಕುರಿತು ಪತ್ರ ಬರೆಯಲಾಗಿದ್ದು, ಆಸನ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೋಟಿಸ್ ಜಾರಿಗೊಳಿಸಲಾಗಿತ್ತು. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ಸಿ.ಸಿ. ಕ್ಯಾಮರಾಗಳನ್ನು ಸ್ಥಾಪಿಸಿ, ಸೂಕ್ತ ಆಸನ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಈ ನಿರ್ದೇಶನಗಳನ್ನು ಪಾಲಿಸದಿರುವುದು ಶಿಕ್ಷಣ ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಮೇಲಾಧೀಕಾರಿಗಳು ಕಾರಣ ಕೇಳಿನೋಟಿಸ್ ಜಾರಿಗೊಳಿಸಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ಬಿಸಿಮುಟ್ಟಿಸಿದ್ದಾರೆ.
Comments are closed.