ಭವ್ಯ ಭಾರತ ದೇಶದ ಉಪ ಪ್ರಧಾನಿ ಸಮಾಜ ಸುಧರಕ, ದೀನ ದಲಿತರ ಧೀಮಂತ ನಾಯಕ ತಾಯಿ ಭಾರತಾಂಭೆÉಯ ಹೆಮ್ಮೆಯ ಪುತ್ರ 12ಕ್ಕೂ ಅಧಿಕ ಕೇಂದ್ರ ಸರಕಾರಿ ಇಲಾಖೆಗಳ ಸಚಿವರಾಗಿ ಯಶಸ್ವಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ಹಸಿರು ಕ್ರಾಂತಿಯ ಹರಿಕಾರ, ಡಾ. ಬಾಬು ಜಗಜೀವನರಾಂ ರವರ 118ನೇ ಜಯಂತೋತ್ಸವ ತನ್ನನಿಮಿತ್ತ ಈ ಲೇಖನೆ
ಬಿಹಾರ ರಾಜ್ಯವನ್ನು “ ಪ್ರಾಚೀನ ಭಾರತದ ಜನ ತಾಂತ್ರಿಕ ವ್ಯವಸ್ತೆಯ ತೊಟ್ಟಿಲು “ ಎಂದೆ ಕರೆಯಲಾಗುತ್ತದೆ. ಪ್ರಪ್ರಥಮವಾಗಿ ಸಮಾನತೆ, ಸಹೊದರತೆ ಮತ್ತು ಸ್ವಾತಂತ್ರ್ಯದ ಬೀಜಗಳನ್ನು ಚೆಲ್ಲಿದ ಜನ್ಮ ಭೂಮಿಯ ಹೌದು ಪುಣ್ಯ ಭೂಮಿಯು ಹೌದು, ಅಂಗುಲಿ ಮಾಲಾ, ಸುನೀತಾ, ಉಪಾಲ ಜೀವಕ ಮುಂತಾದ ದಲಿತರ ಅಂಧಕಾರದ ವಲಯಗಳಿಗೆ ಬುದ್ಧನ ಕರುಣೆ ಪ್ರಿತಿ ವಾತ್ಸಲ್ಯದ ಹೊಂಗಿರಣಗಳು ಸುಸಿದ ಜಾಗ, ಭಾರತದ ಸಾಂಸ್ಕøತಿಕ ಐಕೈಕ ಮತ್ತು ಸಮಗ್ರತಿಯನ್ನು ಸಾಧಿಸಿದ ಅಶೋಕನ ಸಾಮ್ರಾಜ್ಯ ಬಿಹಾರ, ಭಗವಾನ ಮಾಹಾವೀರ, ಚಂದ್ರಗುಪ್ತ ಮೌರ್ಯ, ಕೌಟಿಲ್ಯ, ವಿಕ್ರಮಾದಿತ್ಯ, ಹರ್ಷವರ್ಧನ, ಜೆ.ಡಿ, ಟಾಟಾ, ಡಾ. ಬಾಬು ರಾಜೇಂದ್ರ ಪ್ರಸಾದ, ಜಯಪ್ರಕಾಶ ನಾರಾಯಣ, ಮುಂತಾದ ಅನೇಕ ಚಿಂತಕರನ್ನು ಸಮಾಜ ಸುಧಾರಕರನ್ನು ರಾಜಕೀಯ, ವಿಚಾರಧಾರೆಯ ಪ್ರತೀಕ, ಇಂಥವರ ಸಾಲಿನಲ್ಲಿ ದಲಿತರ ಕಣ್ಮಣಿ, ವಿಶಿಷ್ಟ, ಸಾಮಾಜಿಕ, ರಾಜಕೀಯ ವಿಚಾರಧಾರೆಯ ಪ್ರತೀಕ, ಬೌದ್ಧ ನಾಡಿನಲ್ಲಿ ಜನಿಸಿದ ಕಪ್ಪುರತ್ನ ಹಾಗೂ ಭಾರತ ದೇಶದ ಉಪ ಪ್ರಧಾನಿ ಡಾ: ಬಾಬು ಜಗಜೀವನರಾಂ ಹುಟ್ಟಿದ್ದು ಇದೇ ಬಿಹಾರ ರಾಜ್ಯದ ಶಹಾಬಾದ ಜಿಲ್ಲೆಯ ಚೌದ್ವಾ ಗ್ರಾಮದಲ್ಲಿ ಶ್ರೀ ಶೋಭಿರಾಮ ಮತ್ತು ವಸಂತದೇವಿಯ ಉದರದಲ್ಲಿ 5 ಐಪ್ರಿಲ್ 1908ರಂದು ಜನಿಸಿದರು.
ಶಿಕ್ಷಣ 1914ನೇ ಜನೆವರಿ ವಸಂತಪಂಚಮಿಯ ದಿನದಂದು ಶ್ರೀ ಶೋಭಿರಾಮ ಮತ್ತು ವಸಂತದೇವಿಯ ಜೊತೆಗೂಡಿ ಕಪಿಲಮುನಿ ತ್ರೀಪಾಠಿಯಂಬ ಉಪಾಧ್ಯಾಯಕರಿದ್ದ ಶಾಲೆಗೆ ದಾಖಲು ಮಾಡಿದರು, ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ಮಾಧ್ಯಮಿಕ ಶಿಕ್ಷಣಕ್ಕಾಗಿ ಪಕ್ಕದ ಅರ್ಹಾ ಪಟ್ಟಣದಲ್ಲಿದ್ದ ಅಗರವಾಲ ಇಂಗ್ಲಿಷ ಶಾಲೆಗೆ 2 ಜೂನ್ 1920 ರಂದು ಸೇರ್ಪಡೆಯಾದರು, ಮಾಧ್ಯಮಿಕ ಶಾಲೆ ಓದಿದ ಬಳಿಕ ಜಗಜೀವನರಾಂ ರವರು 2 ಜೂನ್ 1922 ರಂದು ಅರ್ಹಾ ಪಟ್ಟಣದಲ್ಲಿದ್ದ ಪ್ರೌಢ ಶಾಲೆಗೆ ಪ್ರವೆಶ ದೊರಕಿಸಿಗೊಂಡರು, ಇಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆಯುತ್ತಿದ್ದರು ಮತ್ತು 1931 ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಬಿ.ಎಸ್.ಸಿ ಪದವಿಯನ್ನು ಪಡೆದರು. ದಲಿತರ ದಾಸ್ಯ ವಿಮೋಚನೆ ಹಾಗೂ ರಾಷ್ಟದ ಸ್ವಾತಂತ್ರ್ಯ ಬೇರೆ ಬೇರೆಯಿಲ್ಲ ಎರಡು ಒಂದಕ್ಕೊಂದು ಬೆಸೆದುಕೊಂಡಿವೆ, ಈ ದೇಶದ ನತದೃಷ್ಟ ಸಾಮಾಜಿಕ ಪಿಡಿಗಾಗಿ ನೇರವಾಗಿ ಬಲಿಯಾದವರೆ ಅಸ್ಪøಶ್ಯರು. 1919ರ ನಂತರ ಭಾರತದಲ್ಲಿ ವಿರಳ ಪ್ರಮಾಣದಲ್ಲಿ ನಿಮ್ಮ ವರ್ಗಗಳ ಸಂಘಟನೆಗಳು ತಮ್ಮ ಹಕ್ಕು ಬಾದ್ಯತೆಗಾಗಿ ಆಗ್ರಹಿಸುತ್ತಿದ್ದವು.
ಈ ಹೊತ್ತಿಗಾಗಲಿ ಡಾ: ಬಿ.ಆರ್. ಅಂಬೆಡ್ಕರ ರವರು ತಮ್ಮ ಮೊದಲ ಹಂತದ ಸಾಮಾಜಿಕ ಹೋರಾಟದ ಅಭಿಯಾನದಲ್ಲಿ ಮೇಲುಗೈ ಸಾಧಿಸಿದರು. ಅವರ ಸಿದ್ಧಾಂತ ಭಾಷಣ ತರ್ಕಗಳೆಲ್ಲವವು ಅನ್ಯಾಯದ ವಿರುದ್ಧ ಕಿಡಿಯನ್ನೆ ಕಾರಿದವರು ಬಾಬುಜೀ ರವರು ಕೊಲ್ಕತ್ತಾಲ್ಲಿದ್ದಾಗ ಎಲ್ಲಾ ಶೋಷಿತ ಹಾಗೂ ದುರ್ಬಲ ವರ್ಗಗಳ ಎಕಿಕರಣಕ್ಕಾಗಿ ದುಡಿಯತೊಡಗಿದರು. ಇದೇ ಸಂದಂಭದಲ್ಲಿ ದಲಿತ ಸಂಘಟನೆಗಳನ್ನು ಹುಟ್ಟು ಹಾಕುವಲ್ಲಿ ಯಸಸ್ವಿಯಾದರು ಸೆಣಬು ಗಿರಣಿಗಳ ದಲಿತ ಕಾರ್ಮಿಕರ ಒಂದು ಬೃಹತ ಸಮ್ಮೆಳನವನ್ನು ಏರ್ಪಡಿಸಿದರು. ಸುಮಾರು 15000 ದಷ್ಟು ಕಲ್ಕತ್ತಾ ನಗರದಲ್ಲಿ ಒಂದೇ ವೇದಿಕೆಯಲ್ಲಿ ಸೇರಿದ್ದು ಜಗಜೀವನರಾಂರ ಪ್ರಮುಖ ಘಟನೆ. ಬಂಗಾಳ ಕಾರ್ಮಿಕರ ಅಂದೋಲನದ ಇತಿಹಾಸದಲ್ಲಿಯೆ ಪ್ರಮುಖ ಘಟನೆ. ಬಂಗಾಳ ಕಾರ್ಮಿಕರ ಅಂದೋಲನದ ಇತಿಹಾಸದಲ್ಲಿಯೆ ಇದು ಸ್ಪಷ್ಟ ಹೆಜ್ಜೆಯಾಗಿತ್ತು. ಈ ಸಮ್ಮೆಳವನ್ನು ಮುನ್ನಡೆಸುವವರ ಮೂಲಕ ಜಗಜೀವನರಾಂ ರಲ್ಲಿ ಹುದುಗಿದ್ದ ಧೀಮಂತ ನಾಯಕತ್ವದ ಗುಣವನು ಹೊರಹೊಮ್ಮಿಸಿತ್ತು.
ಸ್ವಾತಂತ್ರ್ಯ ಪುರ್ವ ರಾಜಕಾರಣದ ಹೋರಾಟ:
ಸಂವಿಧಾನದ ರಚನೆ ಸಮಿತಿಯಲ್ಲಿ ಬಾಬುಜೀ ರವರ ಈ ಐದು ನಿಯಮಾವಳಿ ಕ್ರಮಬದ್ಧ ಸಮಿತಿ, ಅಲ್ಪಸಂಖ್ಯಾತರ ಸಮಿತಿ, ಮೂಲಭೂತ ಸಲಹಾ ಸಮಿತಿ, ಸೇರಲ್ಪಡುವ ಪ್ರದೇಶಗಳ ಸಮಿತಿ ಮತ್ತು ಸಂಯುಕ್ತ ಸಂವಿಧಾನ ಸಮಿತಿಯಂತ ಈ ಉಪಸಮಿತಿಗಳಲ್ಲಿ ಸದಸ್ಯರಾಗಿ ಕರ್ತವ್ಯ ನಿರ್ವಹಿನಿದರು.
ಕಲಬುರಗಿ ನಗರದಲ್ಲಿ ಅವರ ಪುತ್ಥಳಿ ನಿರ್ಮಾನವಾಗಿದ್ದು, ಜಿ.ರಾಮಕೃಷ್ಣ ರವರು ಶ್ರಮ ಮ್ಮತ್ತು ಶ್ರೀ ಭೀಮಣ್ಣ ಬಿಲ್ಲವ ಮತ್ತು ಶ್ರೀ ಅಂಬಾರಾಯ ಎಂ.ಕೆ ಚಲಗೇರಾ ಸುಮಾರು 11 ವರ್ಷ ಶ್ರಮಪಟ್ಟು 12 ಅಡಿಯ ಉದ್ದದ ಪುತ್ಥಳಿ ದಿನಾಂಕ 27.05.2012ರಂದು ನಿರ್ಮಾಣವಾಗಿದ್ದು ಇತಿಹಾಸ ಇದೆ.
ಅಂಬಾರಾಯ ಎಂ.ಕೆ ಚಲಗೇರಾ
ಡಾ: ಬಾಬು ಜಗಜೀವನರಾಂ ಅಭಿಮಾನಿ.
ಪುತ್ಥಳಿ ನಿರ್ಮಾಣ ಸಮಿತಿ, ಕಲಬುರಗಿ
Comments are closed.