Shubhashaya News

ಬಣ್ಣದೋಕುಳಿ ಶಾಂತಿಗೆ ಭಂಗ ತರದಿರಲಿ: ರೆಡ್ಡಿ

ಚಿತ್ತಾಪುರ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಹೋಳಿ ಹುಣ್ಣಿಮೆ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಪಿಎಸ್‍ಐ ಮಂಜುನಾಥ ರೆಡ್ಡಿ ಮಾತನಾಡಿದರು.

ಹೋಳಿ ಹುಣ್ಣಿಮೆ ಬಣ್ಣದೋಕುಳಿ ಹಬ್ಬ ಶಾಂತಿ ಸುವ್ಯವಸ್ಥೆಗೆ ಭಂಗ ತರಬಾರದು. ಗಲಾಟೆ, ಗದ್ದಲಗಳಿಗೆ ಅವಕಾಶ ನೀಡದೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಪಿಎಸ್‍ಐ ಮಂಜುನಾಥರೆಡ್ಡಿ ಮನವಿ ಮಾಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಹೋಳಿ ಹುಣ್ಣಿಮೆ ನಿಮಿತ್ತ ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದೆ. ಹೀಗಾಗಿ ಪ್ರತಿಯೊಬ್ಬರು ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಕಾನೂನಿನ ಚೌಕಟ್ಟು ಮೀರದಂತೆ ಜಾಗೃತಿ ಅವಶ್ಯಕವಾಗಿದೆ. ಅನಾವಶ್ಯಕ ಸಮಸ್ಯೆಗಳಿಗೆ ಎಡೆಮಾಡಿ ಕೊಡದಂತೆ ಮನೆಯಲ್ಲಿಯೇ ಬಣ್ಣವನ್ನು ಆಡಬೇಕು ಎಂದು ಬಡವಾಣೆಯಲ್ಲಿನ ಯುವಕರಿಗೆ ಹಿರಿಯರು ತೀಳಿಹೇಳಿ ಅರ್ಥ ಪೂರ್ಣವಾಗಿ ಹಬ್ಬ ಆಚರಿಸಬೇಕು ಎಂದರು.
ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ಮಾತನಾಡಿ, ಚಿತ್ತಾಪುರ ಪಟ್ಟಣ ಶಾಂತಿಗೆ ಹೆಸರುವಾಸಿಯಾಗಿದೆ. ಇಲ್ಲಿಯ ಜನರು ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡಲ್ಲ. ಸಂಪ್ರದಾಯದ ಪ್ರಕಾರ ಹೋಳಿ ಹಬ್ಬ ಆಚರಿಸುತ್ತಾರೆ. ಕೊರೊನಾ ಹಿನ್ನೇಲೆಯಲ್ಲಿ ಮನೆಯಲ್ಲಿಯೇ ಹಬ್ಬವನ್ನು ಆಚರಿಸುವ ಮೂಲಕ ಎಲ್ಲ ರೀತಿಯ ಸಹಕಾರ ನೀಡುತ್ತಾರೆ ಎಂದು ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಸದಸ್ಯರಾದ ಮಹ್ಮದ್ ರಸೂಲ್ ಮುಸ್ತಫಾ, ನಾಗರಾಜ ಭಂಕಲಗಿ, ಗೋವಿಂದ ನಾಯಕ್, ಮಲ್ಲಿಕಾರ್ಜುನ ಕಾಳಗಿ, ಕೊಟೇಶ್ವರ ರೇಶ್ಮಿ ಮಾತನಾಡಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ದೀಪಕ್ ಹೊಸ್ಸುರಕರ್, ಪುರಸಭೆ ಸದಸ್ಯರಾದ ಪಾಶಾಮಿಯ್ಯಾ ಖುರೇಶಿ, ಶಿವಕುಮಾರ ಬಾಹರಪೇಠ್, ರಮೇಶ ಬಮ್ಮನಳ್ಳಿ, ಶ್ಯಾಮ ಮೇಧಾ ಮುಖಂಡರಾದ ಶಿವಕಾಂತ ಬೆಣ್ಣೂರಕರ್, ಈರಪ್ಪ ಭೋವಿ, ಅಣ್ಣಾರಾವ ಸಣ್ಣೂರಕರ್, ಆನಂದ ಕಲ್ಲಕ್, ಸಂತೋಷ ಪೂಜಾರಿ, ನಜೀರ್ ಆಡಕಿ, ಮಲ್ಕನ್ ಸೇರಿದಂತೆ ಇತರರು ಇದ್ದರು.

Comments are closed.

Don`t copy text!