Shubhashaya News

ಬಿಜೆಪಿಯಿಂದ ಆಹಾರ, ನೀರು ವಿತರಣೆ

ಚಿತ್ತಾಪುರ: ಪಟ್ಟಣದಲ್ಲಿ ತಾಲೂಕು ಬಿಜೆಪಿ ವತಿಯಿಂದ ಬೇರೆ ಊರುಗಳಿಂದ ಬಂದವರಿಗೆ ಹಾಗೂ ಕೊರೊನಾ ವಾರಿಯರ್ಸ್‍ಗೆ ಆಹಾರ ಪಾಕೇಟ್ ಹಾಗೂ ನೀರು ನೀಡಿದರು.
ಚಿತ್ತಾಪುರ: ಕೊರೊನಾ 2ನೇ ಹಂತದ ವೈರಸ್ ನಿಯಂತ್ರಣಕ್ಕೆ ವಿಕೇಂಡ್ ಕಫ್ರ್ಯೂನಿಂದಾಗಿ ಪಟ್ಟಣದಲ್ಲಿ ಎಲ್ಲ ಅಂಗಡಿ ಮುಗ್ಗಟ್ಟುಗಳು ಬಂದ ಮಾಡಿರುವುದರಿಂದ ಬೇರೆ ಊರುಗಳಿಂದ ಬಂದವರಿಗೆ ಹಾಗೂ ಕೊರೊನಾ ವಾರಿಯರ್ಸ್ ಕಾರ್ಯನಿರ್ವಹಿಸುವವರಿಗೆ ತಾಲೂಕು ಬಿಜೆಪಿ ವತಿಯಿಂದ ಆಹಾರ, ನೀರು ವಿತರಿಸಲಾಯಿತು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ ಹೂಗಾರ, ರಾಮದಾಸ ಚವ್ಹಾಣ, ನಗರಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ನೇತೃತ್ವದಲ್ಲಿ, ಕೆಲಸದಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ, ಪೊಲೀಸರಿಗೆ, ಗೃಹರಕ್ಷಕ ಸಿಬ್ಬಂದ್ದಿಗಳಿಗೆ, ಆಸ್ಪತ್ರೆಯಲ್ಲಿನ ರೋಗಿಗಳ ಪೋಷಕರಿಗೆ, ದೂರದ ಬೇರೆ ಊರುಗಳಿಂದ ಬಂದು ಇಲ್ಲಿನ ಬಸ್ ನಿಲ್ದಾಣ, ರೈಲು ನಿಲ್ದಾಣ, ಲಾಡ್ಜಿಂಗ್ ಕ್ರಾಸ್, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಭುವನೇಶ್ವರ ವೃತ್ತದಲ್ಲಿ ಹಾಗೂ ಗುಡಿಸಲಿನಲ್ಲಿ ವಾಸಿಸುವ ಜನರಿಗೆ ಊಟದ ಪಾಕೇಟ್, ನೀರು ವಿತರಿಸಲಾಯಿತು.
ವಿಕೇಂಡ್ ಕಫ್ರ್ಯೂನಲ್ಲಿ ಯಾರು ಉಪವಾಸ ಇರಬಾರದು, ಯಾರು ತೊಂದರೆ ಅನುಭವಿಸಬಾರದು ಎಂಬ ದೃಷ್ಠಿಯಿಂದ ಎಲ್ಲರಿಗೂ ಸ್ವಾಧಿಷ್ಟವಾದ ಆಹಾರ ಮತ್ತು ನೀರು ನೀಡಲಾಗಿದೆ. ಕೊರೊನಾ ವೈರಸ್ 2ನೇ ಅಲೆ ಹೆಚ್ಚು ಹರಡುತ್ತಿರುವುದರಿಂದ ಮನೆಯಿಂದ ಯಾರು ಬರದೇ ಮನೆಯಲ್ಲಿಯೇ ಇರಬೇಕು ಎಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು.
ವಕ್ತಾರ ಮಹೇಶ ಬಟಗೇರಿ, ಪಕ್ಷದ ಮುಖಂಡರಾದ ಅಶ್ವಥ ರಾಠೋಡ, ಹೀರು ನಾಯಕ್, ರಮೇಶ ಬೊಮ್ಮನಳ್ಳಿ, ರಮೇಶ ಕಾಳನೂರ, ಶಶಿ ಭಂಡಾರಿ, ತಿಪ್ಪಣ್ಣ ಇವಣಿ, ಪಂಕಜ ಗೌಡ, ಶಿವರಾಮ ಚವ್ಹಾಣ, ಯಮನಪ್ಪ ಭೋಸಗಿ, ರಾಜು ರಾಠೋಡ, ಶಿವು ಭಂಗಿ, ನಿಲೇಶ ರೇಷ್ಮಿ, ಪವನ ಸುಲೇಗಾಂವ, ಮಲ್ಲು ಚಾಳಕರ್, ಭೀಮು ಮಾರಡಗಿ, ಸಾಗರ ಮಾರಡಗಿ, ರವಿ ಪವಾರ ಇದ್ದರು.

Comments are closed.

Don`t copy text!