ಆಳಂದ: ನವ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷರಾಗಿ ಬಂಗರಗಾ ಗ್ರಾಮದ ಬಸಲಿಂಗಪ್ಪ ಆರ್. ಮುದ್ದಾಣೆ ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷ ದಯಾನಂದ ಪಾಟೀಲ ಅವರು ತಿಳಿಸಿದ್ದಾರೆ.
ಈ ನೇಮಕಾತಿ ಕುರಿತು ಹೇಳಿಕೆಯಲ್ಲಿ ತಿಳಿಸಿರುವ ಪಾಟೀಲ ಅವರು, ಸಂಘದ ಧೇಯೋದ್ದೇಶಗಳನ್ನು ರೈತಪರ ಬೇಡಿಕೆಯ ಹೋರಾಟ ಮತ್ತು ಸಂಘಟನೆಯ ಬಲಪಡಿಸುವಲ್ಲಿ ಉತ್ತಮ ಕಾರ್ಯನಿರ್ವಹಿಸಿ ಶೀಘ್ರವೇ ಸಭೆ ಕರೆದು ಇನ್ನೂಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕು ಎಂದು ಅವರು ನೂತನ ಅಧ್ಯಕ್ಷ ಬಸಲಿಂಗಪ್ಪ ಅವರಿಗೆ ಆದೇಶಿಸಿದ್ದಾರೆ.