ರುದ್ರವಾಡಿ ಗ್ರಾಮದ ನೂತನ ಶಾಲಾ ಕೋಣೆಗಳನ್ನು ಶಾಸಕ ಸುಭಾಷ್ ಆರ್ ಗುತ್ತೇದಾರ ಉದ್ಘಾಟಿಸಿದರು.
ಪರಿಸರ ವ್ಯವಸ್ಥೆಯಲ್ಲಿ ಸಮಾನ ಶಿಕ್ಷಣದಿಂದ ಸಮಾನ ಅವಕಾಶಗಳು ದೊರಯುತ್ತವೆ ಅವುಗಳನ್ನು ಸರಿಯಾಗಿ ಬಳಸಿಕೊಂಡರೆ ಶಿಕ್ಷಣದ ಸಾರ್ಥಕತೆ ಮನದಟ್ಟಾಗುತ್ತದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹೇಳಿದರು.
ಶನಿವಾರ ಆಳಂದ ತಾಲೂಕಿನ ರುದ್ರವಾಡಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ನಬಾರ್ಡ ಯೋಜನೆಯ ಅಡಿಯಲ್ಲಿ ಲೋಕೋಪಯೋಗಿ ಇಲಾಖೆಯ ನೆರವಿನಿಂದ 60 ಲಕ್ಷ.ರೂ. ಗಳ ವೆಚ್ಚದಲ್ಲಿ ನಿರ್ಮಿಸಿರುವ ನೂತನ 6 ಶಾಲಾ ತರಗತಿ ಕೋಣೆಗಳ ಉದ್ಘಾಟನೆ ನೇರವೇರಿಸಿ ಮಾತನಾಡಿದರು.
ತಾಲೂಕಿನಾದ್ಯಂತ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಪ್ರಯತ್ನಿಸಲಾಗುತ್ತಿದೆ ಈ ನಿಟ್ಟಿನಲ್ಲಿ ಬಹಳ ವರ್ಷಗಳ ಹಿಂದೆ ಕಟ್ಟಿದ ಶಾಲೆಗಳಿಗೆ ಕಾಯಕಲ್ಪ ನೀಡುವ ಹಂತವಾಗಿ ಶಾಲಾ ಕೋಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಇದರಿಂದ ಭೌತಿಕ ಸಂಪನ್ಮೂಲ ಭರ್ತಿಯಾಗಿ ವಿದ್ಯಾರ್ಥಿಗಳು ಶಾಲೆಗಳತ್ತ ಹೆಜ್ಜೆ ಹಾಕುತ್ತಾರೆ ಎಂದು ಅಭಿಪ್ರಾಯಪಟ್ಟರು.
ಶೈಕ್ಷಣಿಕ ವ್ಯವಸ್ಥೆ ಸುಧಾರಿಸದ ಹೊರತು ಸಾಮಾಜಿಕ ವ್ಯವಸ್ಥೆ ಬದಲಾಗುವುದಿಲ್ಲ ಅದಕ್ಕಾಗಿ ಸರ್ವರಿಗೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಗಳು ಶ್ರಮಿಸುತ್ತಿವೆ ಅದರಂಗವಾಗಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ನೂರಾರು ಯೋಜನೆಗಳು ಚಾಲ್ತಿಯಲ್ಲಿವೆ ಇದರ ಲಾಭವನ್ನು ಸಮಾಜದ ಜನತೆ ಪಡೆಯಬೇಕು ಎಂದು ಕರೆ ನೀಡಿದರು.
ರುದ್ರವಾಡಿ ಗ್ರಾಮದ ಜನರ ಆಶಯದಂತೆ ಶಾಲಾ ಕೋಣೆಗಳು ನಿರ್ಮಾಣವಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮದ ಇತರೆ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಅಲ್ಲದೇ ಬಹಳ ವರ್ಷಗಳ ಬೇಡಿಕೆಯಾದ ಬಬಲೇಶ್ವರ- ರುದ್ರವಾಡಿ ರಸ್ತೆಗೆ ಅನುದಾನ ಮಂಜೂರಿ ಮಾಡಿ ರಸ್ತೆ ನಿರ್ಮಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಾಣಾಧಿಕಾರಿ ಭರತರಾಜ ಸಾವಳಗಿ, ತಾ.ಪಂ ಉಪಾಧ್ಯಕ್ಷ ಗುರುನಾಥ ಪಾಟೀಲ, ಗ್ರಾ.ಪಂ ಅಧ್ಯಕ್ಷ ಪ್ರಕಾಶ ಭೂಸುಣಗೆ, ಸದಸ್ಯರಾದ ಶ್ರೀಶೈಲ ಚಿಚಕೋಟೆ, ರಘುನಾಥ ಪಾಟೀಲ, ಜ್ಯೋತಿ ಬಸವರಾಜ ಮೂಲಗೆ, ಮಹೇಶ್ವರಿ ನಾಗೇಂದ್ರ ಗುಡ್ಡೆ, ಶಿವಪ್ರಕಾಶ ಹೀರಾ, ಶ್ರೀಧರ ಕೊಟ್ಟರಕಿ, ಕಾಶಿನಾಥ ಕೊಟ್ಟರಕಿ, ಧನರಾಜ ಕೊಟ್ಟರಕಿ, ಮಲ್ಲಿಕಾರ್ಜುನ ಚಿಚಕೋಟಿ, ಶ್ರೀಶೈಲ ಡಿಗ್ಗಿ, ಭೀಮರಾಯ ಭಾವಿಮನಿ, ಆದಿನಾಥ ಹೀರಾ ಸೇರಿದಂತೆ ಇತರರು ಇದ್ದರು.
Comments are closed.