ಆಳಂದ: ನಿರಗುಡಿ ಗ್ರಾಮದಲ್ಲಿನ ಆರಾಧ್ಯದೈವ ಶ್ರೀ ಸಿದ್ದೇಶ್ವರ ದೇವರ ಲಿಂಗ, ಪ್ರತಿಮೆ
ಆಳಂದ: ತಾಲೂಕಿನ ನಿರಗುಡಿ ಗ್ರಾಮದ ಶ್ರೀ ಸಿದ್ದೇಶ್ವರ ಜಾತ್ರೆ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ನಡೆಯಲಿದೆ.
ಏ.11 ರಂದು ಶ್ರೀ ಸಿದ್ದೇಶ್ವರ ಲಿಂಗಕ್ಕೆ ರುದ್ರಾಭಿμÉೀಕ ಮತ್ತು ಗಂಧ ಲೇಪನ ಕಾರ್ಯ ನಡೆಯಲಿದೆ. 12ರಂದು ಶನಿವಾರ, ಸಂಜೆ 7 ಗಂಟೆಗೆ ಊರಿನ ದೇವಾಲಯದಿಂದ ಮತ್ತು ದೇಶಮುಖರ ಮನೆಯಿಂದ ಶ್ರೀ ಸಿದ್ದೇಶ್ವರ ಪಲ್ಲಕ್ಕಿ ಮೆರವಣಿಗೆ ಭಜನೆ, ಡೊಳ್ಳು, ನಂದಿಕೋಲ, ಸಕಲ ವಾದ್ಯ ವೈಭವಗಳೊಂದಿಗೆ ಕೈಕೋಲು ದೀಪಗಳ ಮಹಾಸಂಪತ್ತಿನಲ್ಲಿ ನಡೆಯಲಿದೆ. 13ರಂದು ಭಾನುವಾರ, ರಾತ್ರಿ 8:00 ಗಂಟೆಗೆ ಪ್ರವಚನ ಮತ್ತು ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
14ರಂದು ಸೋಮವಾರ, ಬೆಳಗ್ಗೆ 8:00 ಗಂಟೆಗೆ ಶ್ರೀ ಶಂಭುಲಿಂಗ ಶಿವಾಚಾರ್ಯರು (ಪಡಸಾವ) ಹಾಗೂ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು (ವಿರಕ್ತಮಠ ಮಾದನಹಿಪ್ಪರಗಾ) ಅವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಸಿದ್ದೇಶ್ವರರ ನಾಗರಹೆಡೆ ಮೆರವಣಿಗೆ ಹಾಗೂ ಮೂರ್ತಿ ಪ್ರತಿμÁ್ಠಪನೆ ನಡೆಯಲಿದೆ. ಊರಿನ ಹೆಣ್ಣುಮಕ್ಕಳಿಗೆ ಪ್ರಣತಿ (ಸಮಾಯಿ) ಹಾಗೂ ಉಡಿ ತುಂಬುವ ಕಾರ್ಯಕ್ರಮವನ್ನು ಶ್ರೀಗಳ ಅಮೃತಹಸ್ತದಿಂದ ನಡೆಸಲಾಗುವುದು.
15ರಂದು ಮಂಗಳವಾರ, ನಸುಕಿನ ಜಾವ ನಿರಗುಡಿ ಗ್ರಾಮದಿಂದ ಹಳ್ಳದ ಸಿದ್ಧೇಶ್ವರ ದೇವಾಲಯದವರೆಗೆ ಭಕ್ತಾಧಿಗಳ ಧೀರ್ಘ ದಂಡವತ ಶಿರಸಾμÁ್ಟಂಗ ನಮಸ್ಕಾರಗಳ ಕೈಗೊಳ್ಳುವೆರು. 16ರಂದು ಬುಧವಾರ, ರಾತ್ರಿ 8:00 ಗಂಟೆಗೆ ಗೀಗೀ ಪದಗಳ ಕಾರ್ಯಕ್ರಮ, ನಂತರ ರಾತ್ರಿ 12 ಗಂಟೆಗೆ ಸಭೀಣಿಯ ಮೆರವಣಿಗೆಯೊಂದಿಗೆ ಶ್ರೀ ಸಿದ್ಧೇಶ್ವರ ದೇವಾಲಯ ಪ್ರವೇಶ, ನಸುಕಿನ ಜಾವ 3:00 ಗಂಟೆಗೆ ಸಹಸ್ರÀದೀಪ ಮಹೋತ್ಸವ, ಹಸುಗೂಸುಗಳ ನಿವಾಳ ಹಾಗೂ ಮಕ್ಕಳ ಜಡೆ ತೆಗೆಯುವ ಕಾರ್ಯ ನಡೆಯಲಿದೆ. 17ರಂದು ಗುರುವಾರ, ಬೆಳಗ್ಗೆ ಶ್ರೀ ಸಿದ್ದೇಶ್ವರ ಪಲ್ಲಕ್ಕಿ ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮ ಪ್ರವೇಶಿಸಲಿದೆ. ಸಾಯಂಕಾಲ 5:00 ಗಂಟೆಗೆ ಜಂಗಿ ಕುಸ್ತಿಗಳು, ರಾತ್ರಿ 7:00 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ, ನಂತರ ಮಹೋತ್ಸವಕ್ಕೆ ಮಂಗಳಗೊಳ್ಳಲಿದೆ. ಈ ಜಾತ್ರೆ ಉತ್ಸವದಲ್ಲಿ ಎಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಸಿದ್ಧೇಶ್ವರ ದೇವರ ದರ್ಶನಾಶೀವಾದ ಪಡೆಯಬೇಕು ಎಂದು ಭಕ್ತಾದಿಗಳ ಪರವಾಗಿ ಗ್ರಾಮದ ಪಿಕೆಪಿಎಸ್ ಅಧ್ಯಕ್ಷ ಆನಂದ ದೇಶಮುಖ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.