ಆಳಂದ: ಸ್ಥಳೀಯ ಸಾರಿಗೆ ಸಂಸ್ಥೆ ಘಟಕದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಗ್ರಾಮೀಣ ಮಹಿಳೆಯೋರ್ವಳು ಕಳೆದುಕೊಂಡಿದ್ದ ಹಣವನ್ನು ಬಸ್ ನಿರ್ವಾಹಕ ಮತ್ತು ಚಾಲಕರು ತಮ್ಮಗೆ ದೊರೆತ ಹಣವನ್ನು ಘಕಟ ವ್ಯವಸ್ಥಾಪಕ ಯೋಗಿನಾಥ ಸರಸಂಬಿ ಅವರ ಸಮ್ಮುಖದಲ್ಲಿ ಮರಳಿಸುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ.
ತಾಲೂಕಿನ ಮಟಕಿ ಗ್ರಾಮದ ಸುಮಯಾ ಜಾಫರ್ ಎಂಬುವ ಮಹಿಳೆಯು ಎರಡೂ ದಿನಗಳ ಹಿಂದೆ ಮಟಕಿಗ್ರಾಮದಿಂದ ನಿರಗುಡಿ ಮಾರ್ಗಕ್ಕೆ ಸಾರಿಗೆ ಸಂಸ್ಥೆಯ ಬಸ್ನಲ್ಲಿ ಪ್ರಯಾಣಿಸುವಾಗ ತನ್ನ ಬಳಿಯಿದ್ದ 20ಸಾವಿರ ರೂಪಾಯಿ ಬಸ್ನಲ್ಲಿ ಕಳೆದುಕೊಂಡಿದ್ದರು.
ಬಳಿಕ ಬಸ್ ಪರಿಶೀಲಿಸುವಾಗ ನಿವಾಹಕ ವಿಜಯಕುಮಾರ ಅವರಿಗೆ ಈ ಹಣ ಪತ್ತೆಯಾಗಿದ್ದು, ಕೂಡಲೇ ಘಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ ಅವರ ಗಮನಕ್ಕೆ ತಂದಿದ್ದಾರೆ. ಇದರಿಂದಾಗಿ ಸಮರ್ಪಕ ಪರಿಶೀಲಿಸಿದ ಹಣ ಕಳೆದುಕೊಂಡಿದ್ದ ಸುಮಯಾ ಅವರ ಪತಿ ಜಾಫರ್ಅವರನ್ನು ಕರೆದು 20 ಸಾವಿರ ರೂಪಾಯಿ ನೀಡಿದ್ದರು. ಪ್ರಾಮಾಣಿಕತೆ ಮೆರೆದ ಬಸ್ ಸಿಬ್ಬಂದಿ ಕಾರ್ಯವನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದ ಘಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ ಅವರು, “ಸಂಸ್ಥೆಯ ಬಸ್ ಸಿಬ್ಬಂದಿಯ ಈ ನಡವಳಿಕೆಯಿಂದ ಸಂಸ್ಥೆಯ ಗೌರವ ಹೆಚ್ಚಾಗಿದೆ. ಎಲ್ಲ ಸಿಬ್ಬಂದಿಗಳು ಈ ಉದಾಹರಣೆಯಿಂದ ಪ್ರೇರಣೆ ಪಡೆಯಬೇಕು,” ಎಂದರು.ನಿರ್ವಾಹಕ ವಿಜಯಕುಮಾರ ಮತ್ತು ಚಾಲಕ ಗುರಬಸಯ್ಯಾ ಸ್ವಾಮಿ ಅವರ ಪ್ರಾಮಾಣಿಕತೆ ಕಾರ್ಯಕ್ಕೆ ಶ್ಲಾಘಿಸಿದ್ದು, ಅಲ್ಲದೆ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
Comments are closed.