Shubhashaya News

ಯೋಗ್ಯತೆಗೆ ತಕ್ಕಂತೆ ನೌಕರಿಗಾಗಿ ಬೈಸಿಕಲ್ ಯಾತ್ರೆ

ಇಲ್ಲೊಬ್ಬ ಯುವಕ ತನ್ನ ರಾಜ್ಯ ಮಧ್ಯಪ್ರದೇಶದಿಂದ ಆಂಧ್ರಪ್ರದೇಶದ ತಿರುಪತಿಯವರೆಗೆ ಬೈಸಿಕಲ್ ಮೇಲೆ ಪ್ರಯಾಣ ಮಾಡುತ್ತಿದ್ದಾರೆ. ಸಧ್ಯ ಕರ್ನಾಟಕ ತಲುಪಿರುವ ಇವರು ಪ್ರಸ್ತುತ ಕರ್ನಾಟಕದ ಗಡಿ ಭಾಗ ಖಜೂರಿ ಬಾರ್ಡರ್ ಮೂಲಕ ಇಂದು ಕಲಬುರಗಿಗೆ ಪ್ರಯಾಣಿಸಿದ್ದಾರೆ.

ಇವರ ಹೆಸರು ಬಾಪುಸಿಂಗ್ ಇವರು ಮಧ್ಯಪ್ರದೇಶದ ಮಂದಸೌರ ಜಿಲ್ಲೆಯವರು. ದೇಶದ ಶಾಂತಿ, ಸೌಹಾರ್ದ, ಅಖಂಡತೆಗಾಗಿ ಹಾಗೂ ಇನ್ನೂ ಕೆಲವು ಸಂಕಲ್ಪದೊಂದಿಗೆ ಒಟ್ಟು 1800 ಕೀ.ಮಿ ಪ್ರಯಾಣವನ್ನು ಬೈಸಿಕಲ್ ಮೇಲೆ ಮಾಡುತ್ತಿದ್ದಾರೆ. ಫೆ. 2ರಿಂದ ಆರಂಭವಾದ ಇವರ ಬೈಸಿಕಲ್ ಯಾತ್ರೆ ಸಧ್ಯ ಇಂದು ಕಲಬುರಗಿ ಜಿಲ್ಲೆಗೆ ಆಗಮನವಾಗಿದೆ. ಯಾತ್ರೆಯುದ್ದಕ್ಕೂ ಪ್ರತಿದಿನ 7 ಗಂಟೆಯಿಂದ ಸಾಯಂಕಾಲ 7 ಗಂಟೆಯವರೆಗೆ ಬೈಸಿಕಲ್ ಸವಾರಿ ಮಾಡುತ್ತಾರೆ. ಪ್ರತಿನಿತ್ಯ 110-120 ಕೀ.ಮೀ ಬೈಸಿಕಲ್ ಚಲಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ.

ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಮತ್ತು ಮೀಸಲಾತಿ ಲಭಿಸಲಿ ಹಾಗೂ ಯೋಗ್ಯತೆಗೆ ತಕ್ಕಂತೆ ಸರ್ಕಾರಿ ನೌಕರಿಗಳು ದೊರಕಲಿ ಎನ್ನುವುದು ಇವರ ಆಶಯವಾಗಿದೆ. ಈ ಆಶಯವನ್ನು ಭಗವಂತ ತಿರುಪತಿಯ ವೆಂಕಟೇಶ್ವರ ಈಡೇರಿಸಲಿ ಎಂದು ಯಾತ್ರೆ ಹೊರಟಿದ್ದೇನೆ ಎಂದು ಹೇಳುತ್ತಾರೆ ಬಾಪುಸಿಂಗ್. ಬೈಸಿಕಲ್ ಮುಂದೆ ಹಾಕಿರುವ ಬೋರ್ಡನಲ್ಲಿ ಗಣೇಶ, ಆಂಜನೇಯ, ಬಾಲಾಜಿ, ಮಹಾರಾಣಾ ಪ್ರತಾಪ, ಚಂದ್ರಶೇಖರ ಆಜಾದ್ ಫೋಟೊ ಹಾಕಿದ್ದಾರೆ ಅಲ್ಲದೇ ಬೈಸಿಕಲ್ ಮೇಲೆ ತ್ರಿವರ್ಣ ಧ್ವಜವನ್ನು ಹಾಕಿ ದೇಶಪ್ರೇಮ ವ್ಯಕ್ತಪಡಿಸಿದ್ದಾರೆ.

Comments are closed.

Don`t copy text!