ಆಳಂದ ತಾಲೂಕಿನ ಗಡಿಗ್ರಾಮ ಖಜೂರಿಯಲ್ಲಿ ಭಾರತೀಯ ಜನತಾ ಪಕ್ಷದ 41ನೇ ಸಂಸ್ಥಾಪನಾ ದಿನಾಚಾರಣೆ ಪ್ರಯುಕ್ತ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಆಳಂದ ಮಂಡಲ ಯುವ ಮೋರ್ಚಾ ಅಧ್ಯಕ್ಷ ಕುಮಾರ ಬಂಡೆ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಉದಯಕುಮಾರ ಕಂದಗೂಳೆ, ಗ್ರಾ.ಪಂ ಅಧ್ಯಕ್ಷ ಮಂಜುನಾಥ ಬಂಗರಗೆ, ಸದಸ್ಯರಾದ ಕಲ್ಯಾಣಿ ಖೂನೆ, ತಿಪ್ಪಣ್ಣ ಬಂಡೆ, ಮುಖಂಡರಾದ ಶಿವಲಿಂಗಪ್ಪ ಬಂಗರಗೆ, ಬಸವರಾಜ ಢಗೆ, ಗಾಂಧಿ ಘಂಟೆ, ಗುರುಬಸಪ್ಪ ಹುಲ್ಲೆ, ಸಿದ್ದಾರಾಮ ಢಗೆ, ಪ್ರತಾಪ ವಾಡೆ, ಮಹೇಶ ಹರಳಯ್ಯ ಸೇರಿದಂತೆ ಗ್ರಾಮದ ಅನೇಕ ಬಿಜೆಪಿ ಕಾರ್ಯಕರ್ತರು ಇದ್ದರು.