ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮದಲ್ಲಿ ಓರ್ವ ವ್ಯಕ್ತಿ ಅನುಮಾನಸ್ಪದವಾಗಿ ಸಾವನಪ್ಪಿದ ಘಟನೆ ನಡದಿದೆ.
ರಾವಪ್ಪ ಶರಣಪ್ಪ (49) ಮೃತ ದುರ್ದೈವಿಯಾಗಿದ್ದಾನೆ. ಪ್ರತಿದಿನ ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಮಲಗುತ್ತಿದ್ದರು. ಶುಕ್ರವಾರ ರಾತ್ರಿ ಮನೆಯಿಂದ ಊಟ ಮುಗಿಸಿ ದೇವಸ್ಥಾನದಲ್ಲಿ ಕುಡಿದ ಅಮಲನಲ್ಲಿ ಮಲಗಿದಾಗ ಕೆಳಗೆ ಬಿದ್ದು ಗಾಯಗಳಾಗಿದ್ದು ಸಾವನಪ್ಪಿರಬಹುದು ಎಂಬ ಮೇಲ್ನೋಟಕ್ಕೆ ಗೊತ್ತಾಗಿದ್ದರೂ ಸಾವಿನ ಸಂಶಯವಿದೆ ಎಂದು ಮೃತನ ಸಹೋದರ ಶನಿವಾರ ಬೆಳಗ್ಗೆ ಬಸವರಾಜ ಶರಣಪ್ಪ ಎನ್ನುವವರು ದೂರು ನೀಡಿದ ಪ್ರಕಾರ ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೃತ ರಾವಪ್ಪನ ದವಡೆಗೆ ಹಾಗೂ ತಲೆಯ ಹಿಂಬಾಗದಲ್ಲಿ ರಕ್ತ ಕಲೆಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿದಿನ ದೇವಸ್ಥಾನದಲ್ಲಿ ಮಲಗುತ್ತಿದ್ದ ರಾವಪ್ಪ ಶರಣಪ್ಪ ಅವರು ಅಂದು ಬೆಳಗ್ಗೆ ನೋಡಿದಾಗ ಸಾವನಪ್ಪಿದ ಪ್ರಸಂಗ ನಡೆದಿದೆ. ಕಳ್ಳರು ದೇವಸ್ಥಾನದ ಹುಂಡಿ ಕಳವು ಮಾಡಲು ಬಂದಾಗ ರಾವಪ್ಪ ನೋಡಿದ್ದರಿಂದ ಕೊಲೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
Prev Post
Next Post
Comments are closed.