Shubhashaya News

ಹಲವಡೆ ಬಿರುಗಾಳಿ ಸಹಿತಿ ಮಳೆಗೆ ತೋಟಗಾರಿಕೆ ಹಾನಿ

ಆಳಂದ: ಮಾಡಿಯಾಳ ಗ್ರಾಮದಲ್ಲಿ ಸುರಿದ ಬಿರುಗಾಳಿ ಸಹಿತ ಅಕಾಲಿಕ ಮಳೆಯಿಂದ ಬಾಳೆಗಿಡಗಳು ನೆಲಕುರುಳಿವೆ.

 


ಆಳಂದ: ಮಾಡಿಯಾಳ ಗ್ರಾಮದ ಸುತ್ತಲೂ ಒಂದುಗಂಟೆಗೂ ಹೆಚ್ಚು ಸಮಯ ಸುರಿದ ಅಕಾಲಿಕ ಬಿರುಸಿನ ಮಳೆಯ ರುದ್ರಾವತಾರ ದೃಶ್ಯ ಕ್ಯಾಮಿರಾ ಕಣ್ಣಿಗೆ ಕಂಡಿದ್ದು ಹೀಗೆ.

 

ಆಳಂದ: ಆಳಂದ ವಲಯ ಹೊರತು ಪಡಿಸಿ ತಾಲೂಕಿನ ಮಾಡಿಯಾಳ ಹಾಗೂ ತಡಕಲ್ ಕೋತನಹಿಪ್ಪರಗಾ ಸೇರಿ ಹಲವಡೆ ಭಾನುವಾರ ಬೀರುಗಾಳಿ ಸಮೇತ ರಬಸದ ಅಕಾಲಿಕ ಮಳೆಯಿಂದಾಗಿ ತೋಟಕಾರಿ ಬೆಳೆ ಮತ್ತು ಮನೆಗಳ ಪತ್ರಾಟೀನ್‍ಗಳ ಹಾರಿಹೋಗಿ ನಷ್ಟದ ಬಗ್ಗೆ ವರದಿಯಾಗಿದೆ.
ಕೋತನಹಿಪ್ಪರಗಾ ಗ್ರಾಮದಲ್ಲಿನ ರೇವಣಸಿದ್ಧಯ್ಯಾ ಸ್ವಾಮಿ ಸೇರಿದಂತೆ ಇನ್ನಿತರ ಮನೆಗಳ ಮೇಲಿನ ಪತ್ರಾಗಳು ಹಾರಿಹೋಗಿವೆ. ಅಲ್ಲಲ್ಲಿ ಬೀಸಿದ ಬೀರುಗಾಳಿ ಸಹಿತ ಮಳೆಗೆ ಬೆಳೆ ಮೇವು ಜಾನುವಾರುಗಳ ಮೇವು ಹಾನಿಯಾಗಿದೆ ಎಂದು ವರದಿಯಾಗಿದೆ.
ತಾಲೂಕಿನ ಮಾಡಿಯಾಳ ವಲಯದಲ್ಲಿ ಭಾನುವಾರ ಸಂಜೆ ಸುಮಾರು ಒಂದು ಗಂಟೆ ಗಾಳಿ ಮಳೆ ಸುರಿಯಿತು. ಗಾಳಿ ಮಳೆಯಿಂದಾಗಿ ನಿಂತ ಬಾಳೆ ತೋಟಗಳು ನೆಲಕ್ಕುರುಳಿ ಹಾನಿಯಾಗಿವೆ. ಅಲ್ಲದೆ, ತರಕಾರಿ ಹಣ್ಣಿನ ಬೆಳೆಗಳಿಗೆ ಅಪಾರ ಹಾನಿಯಾಗಿದೆ ಎಂದು ರೈತರು ತಿಳಿಸಿದ್ದಾರೆ. ಮಧ್ಯಾಹ್ನದ ಬಿಸಿಲಿನ ತಾಪವು ಕಾಣುತ್ತಿದ್ದಾಗ ಹಠಾತ್ ಮೋಡಗಳು ಕೂಡ ತೊಡಗಿದವು. ನಾಲ್ಕು ಗಂಟೆಗಳ ನಂತರ ಗಾಳಿ ಮಳೆ ಆರಂಭವಾಯಿತು. ಬಿರುಗಾಳಿಯಿಂದ ಬಾಳೆ ತೋಟಗಳು ನೆಲಸಮವಾದವು. ಈ ಗಾಳಿ ಮಳೆಯಿಂದ ಮಾಡಿಯಾಳನಲ್ಲಿ ಅಂಬವ್ವ್ಯ ಸಿದ್ಧನಾಥ ಮಾಶಾಳೆ ಅವರ ಎರಡು ಎಕರೆ ಬಾಳೆ ತೋಟ ನಾಶವಾಗಿದೆ. ಹಾನಿಯಾದ ತೋಟಗಾರಿಕೆ ಬೆಳೆಗೆ ಇಲಾಖೆಯ ಸರ್ವೆ ನಡೆಸಿ ಪರಿಹಾರ ಒದಗಿಸಿ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಒದಗಿಸಬೇಕು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಅವರು ಒತ್ತಾಯಿಸಿದ್ದಾರೆ.

Comments are closed.

Don`t copy text!