ಮಧ್ಯಪ್ರದೇಶದ ಧಾರ್’ನಲ್ಲಿರುವ ಭೋಜಶಾಲಾ ವಿವಾದದಲ್ಲಿ ಮಧ್ಯಪ್ರದೇಶ ಹೈಕೋರ್ಟ್’ನ ಇಂದೋರ್ ಪೀಠ ಮಹತ್ವದ ತೀರ್ಪು ನೀಡಿದೆ. ಜ್ಞಾನವಾಪಿಯಂತೆ ನ್ಯಾಯಾಲಯವೂ ಎಎಸ್ಐ ಸಮೀಕ್ಷೆಗೆ ಆದೇಶಿಸಿದೆ. ಪುರಾತತ್ವ ಸಮೀಕ್ಷೆ ನಡೆಸುವಂತೆ ಹಿಂದೂ ಕಡೆಯಿಂದ ಬೇಡಿಕೆ ಬಂದಿದ್ದು, ಇಂದೋರ್ ಹೈಕೋರ್ಟ್ ವಿಚಾರಣೆಯ ನಂತರ ತೀರ್ಪನ್ನ ಕಾಯ್ದಿರಿಸಿತ್ತು.ಇಲ್ಲಿ ನಡೆಯುವ ನಮಾಜ್ ನಿಷೇಧಿಸುವಂತೆ ಹಿಂದೂ ಕಡೆಯವರು ಒತ್ತಾಯಿಸಿದ್ದರು. ಸಧ್ಯ ಭಾರತೀಯ ಪುರಾತತ್ವ ಸಮೀಕ್ಷೆ (ASI) ನೇತೃತ್ವದ ಸಮೀಕ್ಷೆಗೆ ಮಧ್ಯಪ್ರದೇಶ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ.
ವೈಜ್ಞಾನಿಕ ಸಮೀಕ್ಷೆಗೆ ಹಿಂದೂ ಸಂಘಟನೆ ಆಗ್ರಹ.!
ಇದಕ್ಕೂ ಮುನ್ನ ಫೆಬ್ರವರಿ 19 ರಂದು, ಹಿಂದೂ ಸಂಘಟನೆಯೊಂದು ಮಧ್ಯಪ್ರದೇಶ ಹೈಕೋರ್ಟ್ ಸಂಪರ್ಕಿಸಿ, ಪಕ್ಕದ ಧಾರ್ ಜಿಲ್ಲೆಯ ವಿವಾದಿತ ಭೋಜ್ಶಾಲಾದ ಸ್ಮಾರಕದ ಬಗ್ಗೆ ಕಾಲಮಿತಿಯೊಳಗೆ ವೈಜ್ಞಾನಿಕ ತನಿಖೆ ನಡೆಸಲು ಎಎಸ್ಐಗೆ ನಿರ್ದೇಶನ ನೀಡುವಂತೆ ಕೋರಿತ್ತು.
ಕೇಂದ್ರ ಸರ್ಕಾರದ ಸಂಸ್ಥೆಯಾದ ಎಎಸ್ಐ, ಆವರಣದ ವೈಜ್ಞಾನಿಕ ತನಿಖೆ / ಸಮೀಕ್ಷೆಯ ಮನವಿಗೆ ಯಾವುದೇ ಆಕ್ಷೇಪವಿಲ್ಲ ಎಂದು ಹೈಕೋರ್ಟ್ನ ಇಂದೋರ್ ಪೀಠಕ್ಕೆ ತಿಳಿಸಿತು, ಆದರೆ ಮುಸ್ಲಿಂ ಕಡೆಯವರು ಅರ್ಜಿಯನ್ನು ವಿರೋಧಿಸಿದರು.
ಭೋಜ್ಶಾಲಾ ಎಎಸ್ಐ ಸಂರಕ್ಷಿತ ಸ್ಮಾರಕವಾಗಿದ್ದು, ಇದನ್ನು ಹಿಂದೂಗಳು ವಾಗ್ದೇವಿ (ಸರಸ್ವತಿ) ದೇವಿಯ ದೇವಾಲಯವೆಂದು ನಂಬುತ್ತಾರೆ, ಆದರೆ ಮುಸ್ಲಿಂ ಸಮುದಾಯವು ಇದನ್ನು ಕಮಲ್ ಮೌಲಾ ಮಸೀದಿ ಎಂದು ಪರಿಗಣಿಸುತ್ತದೆ. ಏಪ್ರಿಲ್ 7, 2003 ರಂದು ಹೊರಡಿಸಿದ ಎಎಸ್ಐ ಆದೇಶದ ಪ್ರಕಾರ, ಹಿಂದೂಗಳಿಗೆ ಪ್ರತಿ ಮಂಗಳವಾರ ಭೋಜ್ಶಾಲಾ ಸಂಕೀರ್ಣದೊಳಗೆ ಪೂಜಿಸಲು ಅವಕಾಶವಿದೆ, ಆದರೆ ಮುಸ್ಲಿಮರಿಗೆ ಪ್ರತಿ ಶುಕ್ರವಾರ ಈ ಸ್ಥಳದಲ್ಲಿ ನಮಾಜ್ ಮಾಡಲು ಅವಕಾಶವಿದೆ.
Comments are closed.