Shubhashaya News

ಎರಡನೇ ಹಂತದ ಕರೋನಾ ಲಸಿಕೆ ವಿತರಣೆ

ಸೋಮವಾರ ಔರಾದ ತಾಲೂಕಿನ ಚಿಂತಾಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ.  ಗಾಯತ್ರಿದೇವಿ ಕರೋನಾ ವ್ಯಾಕ್ಸಿನ್ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ಡಾ. ಶಿವಕುಮಾರ್ ಭೈರವಾಡಗಿ,ಜ್ಯೋತಿ, ಮಂಗಲ. ಶಾಲುಬಾಯಿ, ಸುಕನ್ಯಾ,ಬಾಲಾಜಿ ಮೇತ್ರೇ, ಸಂಜುಕುಮಾರ ಸಾಗರ ಇನ್ನಿತರರು ಇದ್ದರು .
ಔರಾದ್:  ಜೀವ-ಜೀವನ ಬೇಕಾದರೆ ಪ್ರತಿಯೊಬ್ಬರು ಯಾವುದೇ ಭಯವಿಲ್ಲದೆ ಸ್ಥಳೀಯ ಆರೋಗ್ಯ ಕೇಂದ್ರಗಳಿಗೆ ತೆರಳಿ ಕೋವಿಡ ಲಸಿಕೇಯನ್ನು ಪಡೆದುಕೊಳ್ಳಬೇಕು ಎಂದು ಹಿರಿಯ ವೈದ್ಯಾಧಿಕಾರಿ ಡಾ ಗಾತ್ರಿದೇವಿ ನುಡಿದರು.

ತಾಲೂಕಿನ ಚಿಂತಾಕಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಎರಡನೇ ಹಂತದ ಕರೋನಾ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜೀವ-ಜೀವನ ಬೇಕಾದರೆ ಕೋವಿಡ್ ಲಸಿಕೇಯನ್ನು ಪಡೇದುಕೋಳ್ಳಬೇಕು. ಇಂದಿನ ಆಧುನಿಕ ಜೀವನ ಶೈಲಿಯಲ್ಲಿಅಜಾಗರೂಕತೆಯಿಂದ ಎಷ್ಟೋ ಜನರು ನಮ್ಮಎದುರು ಮಣ್ಣು ಪಾಲಾಗಿದ್ದು, ಇಂತಹಪರಿಸ್ಥಿತಿಯಲ್ಲಿ ನಮಗೆ ಜೀವ ಮತ್ತು ಜೀವನಬೇಕಾದರೆ ಜಾಗ್ರತೆ ವಹಿಸಬೇಕೆಂದು  ಹೇಳಿದರು.
ಇನ್ನೋರ್ವ ವೈದ್ಯ ಡಾ ಶಿವಕುಮಾರ ಬೈರವಾಡಗಿ ಮಾತನಾಡಿ ರಾಜ್ಯ ಮತ್ತು ದೇಶದಲ್ಲಿ ಕೋವಿಡ್ ವೈರಸ್‌ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ನಮ್ಮ ಜೀವ ನಮ್ಮ ಕೈಯಲ್ಲಿದೆ. ಹಾಗಾಗಿ, ಸಾರ್ವಜನಿಕರುಎಷ್ಟು ಜಾಗ್ರತೆಯಿಂದ ಇರುತ್ತಾರೆ ಅಷ್ಟು ಒಳ್ಳೆಯದು.ನಾವು ಚೆನ್ನಾಗಿದ್ದು, ನಮ್ಮ ಸುತ್ತಮುತ್ತಲಿನ ಜನರುಚೆನ್ನಾಗಿರಬೇಕಾದರೆ ಕಡ್ಡಾಯವಾಗಿ ಮಾಸ್ಕ್ಧರಿಸಬೇಕು. ಸಾಮಾಜಿಕ ಅಂತರದೊಂದಿಗೆಕಾರ್ಯನಿರ್ವಹಿಸಬೇಕು. ಕಡ್ಡಾಯವಾಗಿ ಸ್ಯಾನಿಟೈಸರ್‌ ಬಳಸಬೇಕು ಎಂದರು.ಜ್ಯೋತಿ, ಮಂಗಲಾ, ಶಾಲುಬಾಯಿ, ಸುಕನ್ಯಾ,ಬಾಲಾಜಿ ಮೇತ್ರೇ, ಸಂಜುಕುಮಾರ ಸಾಗರ ಇನ್ನಿತರರು ಇದ್ದರು .

Comments are closed.

Don`t copy text!