ಆಳಂದ: ತಡಕಲ್ ಗ್ರಾಮದ ಸುನಿತಾ ಎಂ.ಜಮಾದಾರ ಮನೆಯ ಕಳ್ಳತನ ಮಾಡಿದ ಆರೋಪಿಗಳ ಬಂಧಿಸಿ ವಶಪಡಿಸಿಕೊಂಡ ಸಾಮಗ್ರಿಯನ್ನು ಪೊಲೀಸರು ತೋರಿಸಿದರು.
ಆಳಂದ: ತಾಲೂಕಿನ ತಡಕಲ್ ಗ್ರಾಮದಲ್ಲಿ ಜುಲೈ 15ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಮಹಿಳಾ ಆರೋಪಿಗಳನ್ನು ಬಂಧಿಸಿ 51,600 ರೂಪಾಯಿ ಮೌಲ್ಯದ ಕಳವಾದ ಆಭರಣ ಮತ್ತು ನಗದು ಅಳಂದ ಪೆÇಲೀಸರು ಶೀಘ್ರ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಫಿರ್ಯಾದಿ ಸುನೀತಾ ಮಲ್ಲಿಕಾರ್ಜುನ ಜಮಾದಾರ, ತಡಕಲ್ ಗ್ರಾಮ ನಿವಾಸಿ, ಅವರು ತಮ್ಮ ಮನೆಯಲ್ಲಿ ಬೆಳಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯ ನಡುವೆ ಅಪರಿಚಿತ ಕಳ್ಳರು ನುಗ್ಗಿ ಬಂಗಾರ-ಬೆಳ್ಳಿ ಆಭರಣಗಳು, ನಗದು ಹಾಗೂ ಬಾಂಡೆ ಸಾಮಾನುಗಳನ್ನು ಕಳವು ಮಾಡಿದ ಬಗ್ಗೆ ಅಳಂದ ಪೆÇಲೀಸ್ ಠಾಣೆಗೆ ದೂರು ಸಲ್ಲಿಸಿದರು.
ಈ ದೂರಿನ ಆಧಾರವಾಗಿ ಆಳಂದ ಠಾಣೆ ಪ್ರಕರಣ ಸಂಖ್ಯೆ 178/2025, ಭಾರತೀಯ ದಂಡ ಸಂಹಿತೆ (ಃಓS) ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ತನಿಖೆ ಪೆÇಲೀಸ್ ಅಧೀಕ್ಷಕರು ಕಲ್ಬುರ್ಗಿ ಜಿಲ್ಲೆ, ಹೆಚ್ಚುವರಿ ಪೆÇಲೀಸ್ ಅಧಿಕ್ಷಕರು ಹಾಗೂ ಡಿವೈಎಸ್ಪಿ ಆಳಂದ ಉಪವಿಭಾಗ ಇವರ ಮಾರ್ಗದರ್ಶನದಲ್ಲಿ, ಅಳಂದ ಠಾಣೆ ಪಿಐ ಶರಣಬಸಪ್ಪ ಕೊಡ್ಲಾ ಮತ್ತು ಪಿಎಸ್ಐ ಶ್ರೀ ಸಂಜೀವ್ ರೆಡ್ಡಿ (ತನಿಖೆ ) ಅವರ ನೇತೃತ್ವದಲ್ಲಿ ನಡೆಯಿತು.
ಜುಲೈ 17ರಂದು, ತಡಕಲ್ ರಸ್ತೆಯಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಪಟ್ಟಣದ ವಡ್ಡರಗಲ್ಲಿಯ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ, ಈ ಕಾರ್ಯಚರಣೆಯಲ್ಲಿ ಎಸ್ಐ ಪ್ರಭಾವತಿ, ಹೆಚ್ಸಿ ಮಹೆಬೂಬ್ ಶೇಖ ಸಿದ್ದರಾಮ, ಸಚಿನ್, ಸಿದ್ದರಾಮ, ಜಾಕೀರ್ ಮತ್ತು ಮೌಲಾಲಿ ಗುಳ್ಳಳ್ಳಿ ಒಳಗೊಂಡಿದ್ದಾರೆ.
ವಶಪಡಿಸಿಕೊಂಡ ಸಾಮಗ್ರಿ: 4 ಗ್ರಾಂ ಬಂಗಾರದ 02 ಮಕ್ಕಳ ಉಂಗುರಗಳು – ಅಂದಾಜು 40,000ರೂಪಾಯಿ ಹಾಗೂ 30 ಗ್ರಾಂ ಬೆಳ್ಳಿಯ ಮಕ್ಕಳ ಕಾಲು ಚೈನ್ಗಳು 3,600ರೂಪಾಯಿ ನಗದು 3,800ರೂಪಾಯಿ 2 ತಾಮ್ರದ ದೀಪದ ಸಮಾಯಿಗಳ ಬೆಲೆ 2,000, ಕುರುಡಗಿ ಹಾಕುವ ಮಣಿ 600, 2 ಜರ್ಮನ್ ಡಬ್ಬಗಳು ಹಾಗೂ 1 ಜರ್ಮನ್ ಹಂಚು 800 ರೂಪಾಯಿ 5 ಸ್ಟೀಲ್ ತಟ್ಟೆಗಳು 800 ಹೀಗೆ ಒಟ್ಟು ಮೌಲ್ಯ 51,600 ರೂಪಾಯಿ ಸಾಮಗ್ರಿ ಜಪ್ತಿಕೈಗೊಂಡಿದ್ದಾರೆ.
ಆರೋಪಿತ ಮಹಿಳೆಯರು ತನಿಖೆ ವೇಳೆ ತಡಕಲ್ ಗ್ರಾಮದಲ್ಲಿ ಕಳ್ಳತನ ಮಾಡಿದ ಬಗ್ಗೆ ಸ್ವೀಕರಿಸಿರುವುದಾಗಿ ಪೆÇಲೀಸ್ ಮೂಲಗಳು ತಿಳಿಸಿವೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಈ ಕಾರ್ಯಾಚರಣೆ ಪೆÇಲೀಸ್ ಅಧೀಕ್ಷಕರು ಕಲ್ಬುರ್ಗಿ ಜಿಲ್ಲೆ, ಈ ಪ್ರಕರಣವನ್ನು ಬಗೆಹರಿಸಿದ ಅಧಿಕಾರಿ ಮತ್ತು ಸಿಬ್ಬಂದಿಯ ಶ್ರಮಕ್ಕೆ ಪತ್ರಿಕೆ ಪ್ರಕಟಣೆಯನ್ನು ಹೊರಡಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Comments are closed.